Monday, July 15, 2024

ಶ್ರೀ ಗುರು ಸುಧೀಂದ್ರ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ


ಭಟ್ಕಳ: ಶ್ರೀ ಸಂಸ್ಥಾನ ಕಾಶೀಮಠದ ೨೦ನೇ ಯತಿವರ್ಯರಾದ ಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜನ್ಮ ಶತಾಬ್ದ ಆರಾಧನಾ ಮಹೋತ್ಸವದ ಅಂಗವಾಗಿ ಜುಲೈ ತಿಂಗಳ ಆ‌ಷಾಢ ಮಾಸದ-ಸ್ವಾತಿ ನಕ್ಷತ್ರ ೧೫.೦೭.೨೦೨೪ ರಂದು ಭಟ್ಕಳದ ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಶ್ರೀ ಗುರುಗಳಿಗೆ ನಮನ ಸಲ್ಲಿಸಲಾಯಿತು. 

ಕಾಲೇಜಿನ ಬಿ.ಎ, ಬಿಸಿಎ, ಬಿಬಿಎ, ಬಿ.ಕಾಂ ಕೋರ್ಸಗಳಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳಿಗೆ ಶ್ರೀಗಳ ಜನ್ಮ ಶತಾಬ್ದ ಆರಾಧನಾ ಮಹೋತ್ಸವದ ಈ ಸುಸಂದರ್ಭದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಹಯೋಗದೊಂದಿಗೆ "ಶ್ರೀ ಗುರು ಸುಧೀಂದ್ರ ಅಕಾಡೆಮಿಕ್ ಎಕ್ಸಲೆನ್ಸ್ ಅವಾರ್ಡ" ಅನ್ನು ಭಟ್ಕಳ ಎಜ್ಯುಕೇಶನ ಟ್ರಸ್ಟ್ ನ ಆಡಳಿತ ಮಂಡಳಿಯವರು ಘೋ‌‍ಷಿಸಿದರು.

ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕರವರು ಮಾತನಾಡಿ ಕಾಲೇಜು ನಡೆದುಬಂದ ದಾರಿಯನ್ನು ಮೆಲಕು ಹಾಕುತ್ತಾ, ಗುರುಗಳ ಆಶೀರ್ವಾದಪೂರ್ವಕ ಸಹಕಾರವನ್ನು ಸಂಸ್ಮರಿಸಿದರು. ಅಧ್ಯಕ್ಷರಾದ ಡಾ.ಸುರೇಶ ನಾಯಕ ರವರು ಮಾತನಾಡಿ ಶ್ರೀಗಳ ಆಶೀರ್ವಾದದಿಂದ ಕಾಲೇಜು ಅಭಿವೃದ್ಧಿಯನ್ನು ಕಾಣುತ್ತಿದೆ ಎಂದು ಗುರುಗಳನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲರು, ಉಪ-ಪ್ರಾಂಶುಪಾಲರು, ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

No comments:

Post a Comment