Tuesday, January 9, 2024

ರಾಣಿ ಚೆನ್ನಭೈರಾದೇವಿ ಕೃತಿಯ ವಿಚಾರ ಸಂಕಿರಣ

ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಬಿಎ ವಿಭಾಗದಿಂದ ದಿನಾಂಕ 10 ಜನವರಿ 2024ರ ಬುಧವಾರ ಬೆಳಗ್ಗೆ 10 ಗಂಟೆಗೆ ರಾಣಿ ಚೆನ್ನಭೈರಾದೇವಿ ಹಾಗೂ ಈ ಕೃತಿಯ ಕುರಿತ ವಿಚಾರ ಸಂಕಿರಣ, ವಸ್ತು ಪ್ರದರ್ಶನ, ಪುಸ್ತಕ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಿದ್ದು, ರಾಣಿ ಚೆನ್ನಭೈರಾದೇವಿ ಈ ಪ್ರಖ್ಯಾತ ಕೃತಿಯ ಕೃತರ್ು ಡಾ.ಗಜಾನನ ಶರ್ಮ ಹಾಗೂ ಇತಿಹಾಸಕಾರರಾದ ಖ್ಯಾತ ವಾಗ್ಮಿ ಸೋಂದಾ ಲಕ್ಷ್ಮೀಶ ಹೆಗಡೆ ಆಗಮಿಸಲಿದ್ದು, ಸಾಹಿತ್ಯಾಸಕ್ತರು, ಇತಿಹಾಸಕಾರರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪುಸ್ತಕ ಪ್ರದರ್ಶನ-ಮಾರಾಟ, ವಸ್ತು ಪ್ರದರ್ಶನ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಲಭ್ಯವಿದ್ದು, ಸಾರ್ವಜನಿಕರು ಭೇಟಿ ನೀಡಿ, ಇದರ ಸದುಪಯೋಗವನ್ನು ಪಡೆಯಬಹುದಾಗಿದೆ.




No comments:

Post a Comment