ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಸಾಹಿತ್ಯ - ಸಂಗೀತ - ಸಂಸ್ಕೃತಿ ಯನ್ನು ಪೋಷಿಸುವ ಎಸ್.ಜಿ.ಎಸ್.ಸಿ ಸಪ್ತಸ್ವರ ತಂಡದ ವತಿಯಿಂದ ಕಾಲೇಜಿನ ಪ್ರಾಧ್ಯಾಪಕರಿಗೆ, ಸಿಬ್ಬಂದಿಗಳಿಗೆ ಯುತ್ ಆಫ್ ಜಿ.ಎಸ್.ಬಿ ರವರು ಪ್ರಸ್ತುತ ಪಡಿಸಿದ ಶ್ರೀ ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜೀವನ, ದೂರದೃಷ್ಟಿ, ಪರಂಪರೆಯ ಕುರಿತಾದ ಕಿರುಚಿತ್ರ "ಉಲ್ಲೋಚೆ ದೇವು" ಇದರ ಪ್ರದರ್ಶನ ಜರುಗಿತು.
ಕಾಲೇಜಿನ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ನ ಸೆಮಿನಾರ್ ಹಾಲ್ ನಲ್ಲಿ ಜರುಗಿದ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಪೈ ರವರು ಮಾತನಾಡಿ ಶ್ರೀ ಶ್ರೀ ಗಳ ಆಶೀರ್ವಾದ, ಚರಣಸ್ಪರ್ಶದಿಂದ ಕಾಲೇಜು ಕಂಡ ಅಭಿವೃದ್ದಿಯ ಬಗ್ಗೆ ತಿಳಿಸುತ್ತಾ, ಯೂತ್ ಆಫ್ ಜಿ.ಎಸ್.ಬಿ ರವರ ಕಾರ್ಯವನ್ನು ಪ್ರಶಂಶಿಸಿದರು. ಸಪ್ತಸ್ವರ ತಂಡದ ತರಬೇತುದಾರರಾದ ಶ್ರೀ ಕೃಷ್ಣ ಮೊಗೇರ ರವರು ವಂದನಾರ್ಪಣೆಗೈದರು.
Courtesy: https://youtu.be/SwV6WEmAgcs
No comments:
Post a Comment