Saturday, June 21, 2025

ಶ್ರೀ ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜೀವನ, ದೂರದೃಷ್ಟಿ, ಪರಂಪರೆ ಕುರಿತ ಕಿರುಚಿತ್ರ "ಉಲ್ಲೋಚೆ ದೇವು" ಪ್ರದರ್ಶನ

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ  ಸಾಹಿತ್ಯ - ಸಂಗೀತ - ಸಂಸ್ಕೃತಿ ಯನ್ನು ಪೋಷಿಸುವ ಎಸ್.ಜಿ.ಎಸ್.ಸಿ ಸಪ್ತಸ್ವರ ತಂಡದ ವತಿಯಿಂದ ಕಾಲೇಜಿನ ಪ್ರಾಧ್ಯಾಪಕರಿಗೆ, ಸಿಬ್ಬಂದಿಗಳಿಗೆ ಯುತ್ ಆಫ್ ಜಿ.ಎಸ್.ಬಿ ರವರು ಪ್ರಸ್ತುತ ಪಡಿಸಿದ ಶ್ರೀ ಗುರು ಸುಧೀಂದ್ರ ತೀರ್ಥ ಸ್ವಾಮೀಜಿಯವರ ಜೀವನ, ದೂರದೃಷ್ಟಿ, ಪರಂಪರೆಯ ಕುರಿತಾದ ಕಿರುಚಿತ್ರ "ಉಲ್ಲೋಚೆ ದೇವು" ಇದರ ಪ್ರದರ್ಶನ ಜರುಗಿತು.






ಕಾಲೇಜಿನ ಇನ್ಫೋಸಿಸ್ ಫೌಂಡೇಶನ್ ಬ್ಲಾಕ್ ನ ಸೆಮಿನಾರ್ ಹಾಲ್ ನಲ್ಲಿ ಜರುಗಿದ ಚಿತ್ರ ಪ್ರದರ್ಶನ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಪೈ ರವರು ಮಾತನಾಡಿ ಶ್ರೀ ಶ್ರೀ ಗಳ ಆಶೀರ್ವಾದ, ಚರಣಸ್ಪರ್ಶದಿಂದ ಕಾಲೇಜು ಕಂಡ ಅಭಿವೃದ್ದಿಯ ಬಗ್ಗೆ ತಿಳಿಸುತ್ತಾ, ಯೂತ್ ಆಫ್ ಜಿ.ಎಸ್.ಬಿ ರವರ ಕಾರ್ಯವನ್ನು ಪ್ರಶಂಶಿಸಿದರು. ಸಪ್ತಸ್ವರ ತಂಡದ ತರಬೇತುದಾರರಾದ ಶ್ರೀ ಕೃಷ್ಣ ಮೊಗೇರ ರವರು ವಂದನಾರ್ಪಣೆಗೈದರು.

Courtesy: https://youtu.be/SwV6WEmAgcs

ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ.

ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಸನ ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆಯ ಪ್ರಯುಕ್ತ ಭಟ್ಕಳ ಶಹರ ಪೊಲೀಸ್‌ ಠಾಣಾ ವ್ಯಾಪ್ತಿಯ ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿಗೆ ಭಟ್ಕಳ ಶಹರ ಠಾಣೆಯ ಪಿಸ್.ಎಸ್.ಐ ಶ್ರೀ ರಾಠೋಡ್ ರವರು ಠಾಣಾ ಪೊಲೀಸ್ ಸಿಬ್ಬಂದಿ ಶ್ರೀ ದೀಪಕ ನಾಯ್ಕ ರವರೊಡಗೂಡಿ ಭೇಟಿ ನೀಡಿ ವಿದ್ಯಾರ್ಥಿಗಳಿಗೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ,  ಪೋಕ್ಸೋ ಕಾಯ್ದೆ, ಮಾದಕ ವಸ್ತು ವ್ಯಸನದಿಂದ ಆಗುವ ದುಷ್ಪರಿಣಾಮಗಳು, ಸಂಚಾರಿ ನಿಯಮಗಳು, ಮಕ್ಕಳ ಸಹಾಯವಾಣಿ 1098, ಶರಾವತಿ ಪಡೆ ಮತ್ತು ನಿರ್ಭಯ ಪಡೆ. ಜನಸ್ನೇಹಿ ಪೊಲೀಸ್ ಠಾಣೆ.112, ಸೈಬರ್ ಕ್ರೈಂ ಬಗ್ಗೆ ತಿಳಿಸಿ, ಜಾಗೃತಿ ಮೂಡಿಸಿದರು.

ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಶ್ರೀನಾಥ ಪೈ ರವರು ಮಾತನಾಡಿ ಅಪರಾಧ ಪ್ರಕರಣಗಳನ್ನು ತಡೆಯುವಲ್ಲಿ ಪೊಲೀಸ್ ಇಲಾಖೆಯವರ ಕಾರ್ಯವನ್ನು ಕೊಂಡಾಡುತ್ತಾ, ಸಂಚಾರಿ ನಿಯಮಗಳನ್ನು ವಿದ್ಯಾರ್ಥಿಗಳು, ಸಾರ್ವಜನಿಕರು ಪಾಲಿಸಿ ಇಲಾಖೆಗೆ ಸರ್ವ ರೀತಿಯಿಂದ ಸಹಕರಿಸಬೇಕು ಎಂದರು. ಈ ಸಂದರ್ಭದಲ್ಲಿ ಕಾಲೇಜಿನ ಬಿ.ಕಾಂ ವಿಭಾಗದ ಉಪ ಪ್ರಾಂಶುಪಾಲರಾದ ಶ್ರೀ ಪಿಸ್.ಎಸ್.ಹೆಬ್ಬಾರ್, ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಭಟ್ಕಳ ತಾಲೂಕಿನ ವಿಶೇಷ ಪ್ರಕರಣಗಳನ್ನು ಭೇದಿಸುವಲ್ಲಿ ವಿಶೇಷ ಕಾರ್ಯವನ್ನು ಮಾಡಿದ ಪೋಲಿಸ್ ತಂಡಕ್ಕೆ ಕರತಾಡನದ ಮೂಲಕ ಧನ್ಯವಾದ ಸಮರ್ಪಿಸಿ, ಅತಿಥಿಗಳಿಗೆ ಸ್ಮರಣಿಕೆಯನ್ನು ನೀಡಿದರು.





Thursday, June 12, 2025

ಸತತ ಪ್ರಯತ್ನದಿಂದ ಗುರಿಯನ್ನು ತಲುಪಬಹುದು ಗಣೇಶ ಭಟ್ಟ

ಭಟ್ಕಳ: ಭಟ್ಕಳ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 2024-25ನೇ ಸಾಲಿನ ವಾರ್ಷಿಕೋತ್ಸವವು ಜರುಗಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುಮಟಾದ ಸರ್ಕಾರಿ ಹನುಮಂತ ಬೆಣ್ಣೆ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಗಣೇಶ ಭಟ್ಟ " ಶೃದ್ಧೆಯಿಂದ ಸತತವಾಗಿ ಪ್ರಯತ್ನಿಸಿದಾಗ  ಯಾವುದೇ ಗುರಿಯನ್ನು ತಲುಪಬಹುದು, ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಿ ಯಶಸ್ಸನ್ನು ಪಡೆಯಲಿ" ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ಖ್ಯಾತ ಯಕ್ಷಗಾನ ಕಲಾವಿದ ಹಾಗೂ ವೀರ ಚಂದ್ರಹಾಸ ಚಲನಚಿತ್ರದ ನಟರಾದ ಪ್ರಸನ್ನ ಶೆಟ್ಟಿಗಾರ ಮಾತನಾಡಿ "ಬದುಕಿನಲ್ಲಿ ಚಿಂತಿಸದೇ, ಬಂದ ಅವಕಾಶಗಳನ್ನು ಸ್ವೀಕರಿಸಿ ಹಾಗೂ ಆ ಕುರಿತು ಚಿಂತಿಸಿ, ಆಗಲೇ ಅತ್ಯುತ್ತಮ ಸಾಧನೆಗೈಯಲು ಸಾಧ್ಯ" ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಕುಮಟಾದ ರೆವೆನ್ಯೂ ಅಧಿಕಾರಿ, ಕಾಲೇಜಿನ ಬಿಎ ವಿಭಾಗದ ಪೂರ್ವ ವಿದ್ಯಾರ್ಥಿ ವೆಂಕಟೇಶ ಮಾತನಾಡಿ "ಕಾಲೇಜಿನಲ್ಲಿ ತಾವು ಕಳೆದ ದಿನಗಳನ್ನು ಸ್ಮರಿಸುತ್ತ, ತನ್ನ ಯಶಸ್ಸಿನಲ್ಲಿ ಕಾಲೇಜಿನ ಪಾತ್ರ ಬಹುಮುಖ್ಯ, ಕಾಲೇಜಿಗೆ ಸದಾ ಋಣಿಯಾಗಿರುವೆ" ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷ ಡಾ. ಸುರೇಶ ನಾಯಕ "ಮೂರು ವರ್ಷದ ಪದವಿಯಲ್ಲಿ ಕೌಶಲ್ಯವನ್ನು ವೃದ್ಧಿಸಿಕೊಂಡು ಉದ್ಯೋಗವಂತರಾಗಬೇಕು" ಎಂದು ಹೇಳಿದರು.

ಭಟ್ಕಳ ಎಜುಕೇಶನ್ ಟ್ರಸ್ಟ'ನ  ಟ್ರಸ್ಟಿ ನಾಗೇಶ ಭಟ್ಟ ಇವರು ಬಿಎ ಪತ್ರಿಕೋದ್ಯಮ ವಿಭಾಗದವರು ರಚಿಸಿದ ಎಸ್.ಜಿ.ಎಸ್ ಸಮೃದ್ಧಿ ಪತ್ರಿಕೆಯ ೩ನೇ ಸಂಚಿಕೆಯನ್ನು ಆನಾವರಣಗೊಳಿಸಿದರು.

೨೦೨೪-೨೫ನೇ ಸಾಲಿನ ವಿವಿಧ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಪಠ್ಯ ಪಠ್ಯೇತರ, ಕ್ರೀಡಾ ಚಟುವಟಿಕೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು. ಪ್ರಾಂಶುಪಾಲರಾದ ಶ್ರೀನಾಥ ಪೈ ಎಲ್ಲರನ್ನೂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಮುಖ್ಯ ಅತಿಥಿಗಳನ್ನು ಬಿ.ಕಾಂ ವಿಭಾಗದ ಉಪಪ್ರಾಂಶುಪಾಲ ಪಿ.ಎಸ್. ಹೆಬ್ಬಾರ್ ಹಾಗೂ ಬಿ.ಬಿ.ಎ-ಬಿ.ಎ ವಿಭಾಗದ ಉಪಪ್ರಾಂಶುಪಾಲ ವಿಶ್ವನಾಥ ಭಟ್ಟ ಪರಿಚಯಿಸಿದರೆ, ಉಪನ್ಯಾಸಕ ಸುಬ್ರಮ್ಹಣ್ಯ ನಾಯ್ಕ ವಂದಿಸಿದರು. ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ದಿಕ್ಸಿತಾ ಹಾಗೂ  ನೇಹಾ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Monday, May 5, 2025

ನೆದರ್ಲ್ಯಾಂಡ್'ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ


ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ನೆದರ್ಲ್ಯಾಂಡ್'ನ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಸಂಪನ್ಮೂಲ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೈಜೀರಿಯಾ ಮೂಲದ ಅಮೀರಾ ಮುಸ್ತಫಾ ಹಾಗೂ ಲಕ್ಸಂಬರ್ಗ್ ಮೂಲದ ರೀನಾ ಮರಿನಾ ರವರು ನೆದರ್ಲ್ಯಾಂಡ್'ನ ಶಿಕ್ಷಣ ಕ್ರಮ ಹಾಗೂ ವಿಶ್ವವಿದ್ಯಾಲಯದಲ್ಲಿ ಇರುವಂತಹ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದರು.


ಈ ಸಂದರ್ಭದಲ್ಲಿ ನೆದರ್ಲ್ಯಾಂಡ್'ನಲ್ಲಿ ಅಧ್ಯಯನ ಮಾಡುತ್ತಿರುವ ಭಾರತದ ಡಾ. ಪ್ರಿನ್ಸಿಟಾ ಅವರು ಭಾರತೀಯ ಶಿಕ್ಷಣ ಪದ್ಧತಿ ಹಾಗೂ ನೆದರ್ಲ್ಯಾಂಡ್'ನ ಶಿಕ್ಷಣ ಪದ್ಧತಿಯ ಸಾಮ್ಯತೆ-ವ್ಯತ್ಯಾಸವನ್ನು ತಿಳಿಸುತ್ತಾ ವಿವಿಧ ಅವಕಾಶಗಳ ಬಗ್ಗೆ ವಿಸ್ತೃತವಾಗಿ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಸುರೇಶ್ ನಾಯಕ ರವರು ಮಾತನಾಡಿ ಇದೊಂದು ವಿಶೇಷ ಹಾಗೂ ಅಪರೂಪದ ಕಾರ್ಯಕ್ರಮ, ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಉಪಯೋಗವನ್ನು ಪಡೆದುಕೊಂಡು ಹೆಚ್ಚಿನ ಜ್ಞಾನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಶ್ರೀ ಗುರು ಸುಧೀಂದ್ರ ಕಾಲೇಜಿನ ಪ್ರಾಂಶುಪಾಲ ಶ್ರೀನಾಥ್ ಪೈ ಎಲ್ಲರನ್ನು ಸ್ವಾಗತಿಸಿದರು, ಟ್ರಸ್ಟಿ ನಾಗೇಶ್ ಭಟ್ಟ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಈ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು. ಕಾಲೇಜಿನ ವಿದ್ಯಾರ್ಥಿಗಳು ನಮ್ಮ ದೇಶ, ರಾಜ್ಯ, ಕರಾವಳಿ ಕರ್ನಾಟಕದ ಬಗ್ಗೆ, "ಸಿಲಿಕಾನ್ ಬ್ಲೂ ಆಫ್ ಇಂಡಿಯಾ" ಮಂಗಳೂರು ಕ್ಲಸ್ಟರ್ ನ ಉತ್ತರ ಕನ್ನಡ ಜಿಲ್ಲೆಯ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಿನ್ನೋಟ ಹಾಗೂ ಸಾಧಿಸಿದ ಮೈಲುಗಲ್ಲಿನ ಕುರಿತು ವಿಶೇಷ ಪ್ರಸ್ತುತಿಯನ್ನು ಸಾದರ ಪಡಿಸಿದರು.  

ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಹಾಗೂ ನೆದರ್ಲ್ಯಾಂಡ್ ಮ್ಯಾಚ್ ಸ್ಟ್ರೀಚ್ ವಿಶ್ವವಿದ್ಯಾಲಯದ ಪರಸ್ಪರ ಜ್ಞಾನ ಮಂಥನಕ್ಕೆ ಕಾರಣವಾಗಿ, ಭವಿಷ್ಯದಲ್ಲಿ ಹೊಸ ಅವಕಾಶಗಳನ್ನು ಸಾಕ್ಷೀಕರಿಸಿದ್ದು ವಿಶೇಷವಾಗಿತ್ತು.

Monday, April 28, 2025

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಸಿ.ಎ, ಸಿ.ಎಸ್ ಮಾಹಿತಿ ಕಾರ್ಯಾಗಾರ

ಭಟ್ಕಳ: ಅಕೌಂಟ್ಸ್ ಹಬ್ ಎಂದು ಪ್ರಖ್ಯಾತ ವಾಗಿರುವ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ CA, CS ಅನ್ನು ಪೂರೈಸಿದ ಹಳೆಯ ವಿದ್ಯಾರ್ಥಿಗಳು ಹಾಗೂ ತರಬೇತಿ ಸಂಸ್ಥೆಗಳ ಮಾರ್ಗದರ್ಶನ, ಸಹಕಾರದೊಂದಿಗೆ ಹಲವಾರು ವಿದ್ಯಾರ್ಥಿಗಳು ಬಿ.ಕಾಂ CSEET, CA- Foundation ಅನ್ನು ಪೂರೈಸಿ ಮುಂದಿನ ಹಂತದ CS - Executive, CA-Intermediate ಪರೀಕ್ಷೆಗೆ ತಯಾರಿ ನಡೆಸುತ್ತಿರುವರು.

ಇದೀಗ ಬಿ.ಕಾಂ ಜೊತೆಯಲ್ಲಿ ಸಿ.ಎ, ಸಿ.ಎಸ್ ಅನ್ನು ಆನಲೈನ್, ಹೈಬ್ರಿಡ್, ಆಫಲೈನ್ ಮೂಲಕ ಅಧ್ಯಯನ ಮಾಡಲು ದ್ವಿತೀಯ ಪಿಯುಸಿ ಯನ್ನು ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗಾಗಿ ಉಡುಪಿ ಜಿಲ್ಲೆಯ "V-Reach Academy" ಯವರು 2 ಮೇ 2025, ಶುಕ್ರವಾರ ದಂದು ಬೆಳಿಗ್ಗೆ 10 ಗಂಟೆಗೆ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಇನ್ಫೋಸಿಸ್ ಸೆಮಿನಾರ್ ಹಾಲ್ ನಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಿರುವರು.

ಸಿ.ಎ, ಸಿ.ಎಸ್ ಕೋರ್ಸ ಮಾಹಿತಿ, ದಾಖಲಾತಿ, ಅವಕಾಶಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಲಿದ್ದು ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದು ಕಾಲೇಜಿನ ಪ್ರೊಫೆಷನಲ್ ಕೋರ್ಸ ಕಾರ್ಯಕ್ರಮ ಅಧಿಕಾರಿ ಪ್ರೊ. ಪಿ.ಎಸ. ಹೆಬ್ಬಾರ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 



Saturday, December 14, 2024

ಭಟ್ಕಳದ ಕ್ರೀಡಾಪಟುಗಳ ಸಾಧನೆ

ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ, ಚೆಸ್ ಕ್ರೀಡೆಯಲ್ಲಿ ಆಯ್ಕೆಯಾಗಿ  ಯುನಿವರ್ಸಿಟಿ ಬ್ಲೂ ಆಗಿರುವ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ದಕ್ಷಿಣ ವಲಯ ಮಟ್ಟದಲ್ಲಿ ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ.

ಬಿ.ಎ ವಿದ್ಯಾರ್ಥಿನಿ ಕುಮಾರಿ ಪೂಜಾ ಖಾರ್ವಿ, ಈಕೆಯು ವಿಶಾಖಪಟ್ಟಣಂ ನ ಗೀತಂ ವಿಶ್ವವಿದ್ಯಾಲಯದಲ್ಲಿ ಜರುಗಿದ ಚೆಸ್ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ಬೋರ್ಡ-೬ ಗೇಮನಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾಳೆ.


ಬಿಬಿಎ ವಿದ್ಯಾರ್ಥಿ ಕುಮಾರ ಪ್ರವೀಣ ಹರಿಜನ್, ಈತನು ಭೋಪಾಲನ ಎಲ್.ಎನ್.ಸಿ.ಟಿ ವಿಶ್ವವಿದ್ಯಾಲಯದಲ್ಲಿ ಜರುಗಿದ ಕರಾಟೆ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕುಮಿಟೆ ೮೪ ಕಿ.ಲೊ ವಿಭಾಗದಲ್ಲಿ ಅರ್ಹನಾಗಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಚೆಸ್ ಯುನಿವರ್ಸಿಟಿ ಬ್ಲೂ ಕುಮಾರಿ.ಯಮುನಾ ನಾಯ್ಕ ಈಕೆಯು ವಿಶಾಖಪಟ್ಟಣಂ ನ ಗೀತಂ ವಿಶ್ವವಿದ್ಯಾಲಯದಲ್ಲಿ, 

ಕಬಡ್ಡಿ ಯುನಿವರ್ಸಿಟಿ ಬ್ಲೂ ಕುಮಾರಿ.ಸರಸ್ವತಿ ಭಂಡಾರಿ ಈಕೆಯು ತಮಿಳುನಾಡಿನ ಕರೈಕುಡಿ ಅಲಗಪ್ಪಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿದಿಸಿರುತ್ತಾರೆ.  

ಈ ಮೂಲಕ ಕರಾವಳಿ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಕರು, ಸಿಬ್ಬಂದಿವರ್ಗ, ಪಾಲಕರು, ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಂತರರಾಷ್ಟಿçÃಯ ಮಟ್ಟದಲ್ಲಿ ಕೀರ್ತಿಗಳಿಸಲೆಂದು ಶುಭ ಹಾರೈಸಿರುತ್ತಾರೆ.


Tuesday, November 12, 2024

ಬೃಹತ್ ರಕ್ತದಾನ ಶಿಬಿರ

ಭಟ್ಕಳ: HDFC ಬ್ಯಾಂಕ್ ಭಟ್ಕಳ ಶಾಖೆ ಹಾಗೂ RED CROSS BLOOD BANK ಕುಂದಾಪುರ ಇವರ ಸಹಭಾಗಿತ್ವದಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 16 ನವೆಂಬರ 2024 ಶನಿವಾರದಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಕಾಲೇಜಿನ ಎನ್.ಎಸ್.ಎಸ್ ಘಟಕ, ರೋಟರಾಕ್ಟ್ ಕ್ಲಬ್, ಯುತ್ ರೆಡ್ ಕ್ರಾಸ್ ಹಾಗೂ ಉನ್ನತ ಭಾರತ ಅಭಿಯಾನ ಘಟಕಗಳ ಸಹಕಾರದೊಂದಿಗೆ ಜರುಗುವ ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.