Saturday, December 14, 2024

ಭಟ್ಕಳದ ಕ್ರೀಡಾಪಟುಗಳ ಸಾಧನೆ

ಭಟ್ಕಳ: ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು ಆಯೋಜಿಸಿದ ವಿಶ್ವವಿದ್ಯಾಲಯ ಮಟ್ಟದ ಕರಾಟೆ, ಚೆಸ್ ಕ್ರೀಡೆಯಲ್ಲಿ ಆಯ್ಕೆಯಾಗಿ  ಯುನಿವರ್ಸಿಟಿ ಬ್ಲೂ ಆಗಿರುವ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯವನ್ನು ದಕ್ಷಿಣ ವಲಯ ಮಟ್ಟದಲ್ಲಿ ಪ್ರತಿನಿಧಿಸಿ ಉತ್ತಮ ಪ್ರದರ್ಶನ ನೀಡಿರುತ್ತಾರೆ.

ಬಿ.ಎ ವಿದ್ಯಾರ್ಥಿನಿ ಕುಮಾರಿ ಪೂಜಾ ಖಾರ್ವಿ, ಈಕೆಯು ವಿಶಾಖಪಟ್ಟಣಂ ನ ಗೀತಂ ವಿಶ್ವವಿದ್ಯಾಲಯದಲ್ಲಿ ಜರುಗಿದ ಚೆಸ್ ಪಂದ್ಯಾವಳಿಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ, ಬೋರ್ಡ-೬ ಗೇಮನಲ್ಲಿ ಬೆಳ್ಳಿ ಪದಕವನ್ನು ಪಡೆದಿರುತ್ತಾಳೆ.


ಬಿಬಿಎ ವಿದ್ಯಾರ್ಥಿ ಕುಮಾರ ಪ್ರವೀಣ ಹರಿಜನ್, ಈತನು ಭೋಪಾಲನ ಎಲ್.ಎನ್.ಸಿ.ಟಿ ವಿಶ್ವವಿದ್ಯಾಲಯದಲ್ಲಿ ಜರುಗಿದ ಕರಾಟೆ ಪಂದ್ಯಾವಳಿಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿ ಕುಮಿಟೆ ೮೪ ಕಿ.ಲೊ ವಿಭಾಗದಲ್ಲಿ ಅರ್ಹನಾಗಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ.

ಚೆಸ್ ಯುನಿವರ್ಸಿಟಿ ಬ್ಲೂ ಕುಮಾರಿ.ಯಮುನಾ ನಾಯ್ಕ ಈಕೆಯು ವಿಶಾಖಪಟ್ಟಣಂ ನ ಗೀತಂ ವಿಶ್ವವಿದ್ಯಾಲಯದಲ್ಲಿ, 

ಕಬಡ್ಡಿ ಯುನಿವರ್ಸಿಟಿ ಬ್ಲೂ ಕುಮಾರಿ.ಸರಸ್ವತಿ ಭಂಡಾರಿ ಈಕೆಯು ತಮಿಳುನಾಡಿನ ಕರೈಕುಡಿ ಅಲಗಪ್ಪಾ ವಿಶ್ವವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯವನ್ನು ಪ್ರತಿನಿದಿಸಿರುತ್ತಾರೆ.  

ಈ ಮೂಲಕ ಕರಾವಳಿ ಜಿಲ್ಲೆಗೆ ಹಾಗೂ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ. ಇವರ ಸಾಧನೆಗೆ ಭಟ್ಕಳ ಎಜ್ಯುಕೇಶನ್ ಟ್ರಸ್ಟ್ನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು, ದೈಹಿಕ ಶಿಕ್ಷಕರು, ಸಿಬ್ಬಂದಿವರ್ಗ, ಪಾಲಕರು, ಹಾಗೂ ವಿದ್ಯಾರ್ಥಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಂತರರಾಷ್ಟಿçÃಯ ಮಟ್ಟದಲ್ಲಿ ಕೀರ್ತಿಗಳಿಸಲೆಂದು ಶುಭ ಹಾರೈಸಿರುತ್ತಾರೆ.


Tuesday, November 12, 2024

ಬೃಹತ್ ರಕ್ತದಾನ ಶಿಬಿರ

ಭಟ್ಕಳ: HDFC ಬ್ಯಾಂಕ್ ಭಟ್ಕಳ ಶಾಖೆ ಹಾಗೂ RED CROSS BLOOD BANK ಕುಂದಾಪುರ ಇವರ ಸಹಭಾಗಿತ್ವದಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ 16 ನವೆಂಬರ 2024 ಶನಿವಾರದಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಕಾಲೇಜಿನ ಎನ್.ಎಸ್.ಎಸ್ ಘಟಕ, ರೋಟರಾಕ್ಟ್ ಕ್ಲಬ್, ಯುತ್ ರೆಡ್ ಕ್ರಾಸ್ ಹಾಗೂ ಉನ್ನತ ಭಾರತ ಅಭಿಯಾನ ಘಟಕಗಳ ಸಹಕಾರದೊಂದಿಗೆ ಜರುಗುವ ಈ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರಕ್ತದಾನವನ್ನು ಯಶಸ್ವಿಗೊಳಿಸಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Wednesday, November 6, 2024

ರೋಟರಾಕ್ಟ್ ಮತ್ತು ಇಂಟರಾಕ್ಟ್ ಪದಗ್ರಹಣ ಸಮಾರಂಭ

ಭಟ್ಕಳ: "ಕೇವಲ ಸಾಂಪ್ರದಾಯಿಕ ಶಿಕ್ಷಣದಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆ ಸಾಧ್ಯವಿಲ್ಲ, ವಿದ್ಯಾರ್ಥಿಗಳು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಳ್ಳಬೇಕು" ಎಂದು ರೋಟಾರಿಯನ್ ರೋ.ಡಾ.ಗೌರೀಶ್ ಪಡುಕೋಣೆ ಹೇಳಿದರು.

ನಗರದ ಶ್ರೀ ಗುರು ಸುಧೀಂದ್ರ ಮಹಾವಿದ್ಯಾಲಯದ ಘಟಕವಾದ ರೋಟರಾಕ್ಟ್ ಕ್ಲಬ್ ಹಾಗೂ ಆನಂದಾಶ್ರಮ, ಶ್ರೀವಲಿ ಹಾಗೂ ವಿದ್ಯಾಂಜಲಿ ಶಾಲೆಯ 2024-25ನೇ ಸಾಲಿನ ಇಂಟರಾಕ್ಟ್ ಕ್ಲಬ್‌ಗಳ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನೆರವೇರಿಸಿ ಮಾತನಾಡಿದ ಅವರು, "ಪ್ರಪಂಚದ ೧೮೦ ದೇಶಗಳಲ್ಲಿ ಸುಮಾರು ಹನ್ನೊಂದು ಸಾವಿರ ರೋಟರಾಕ್ಟ್ ಕ್ಲಬ್‌ಗಳಿದ್ದು ಅವು ಎರಡು ಲಕ್ಷ ಸದಸ್ಯರನ್ನು ಹೊಂದಿವೆ ಮತ್ತು ಅವರೆಲ್ಲರೂ ತಮ್ಮ ಸೇವೆಯ ಮೂಲಕ ಇತರರ ಜೀವನದಲ್ಲಿ ಬದಲಾವಣೆಯನ್ನು ತರಲು ಪರಿಶ್ರಮಿಸುತ್ತಿದ್ದಾರೆ" ಎಂದರು. 



ರೋಟರಿ ಅಧ್ಯಕ್ಷ ರೋ.ಇಷ್ತಿಯಾಕ್ ಹಸ್ಸನ್, ಕಾರ್ಯದರ್ಶಿ ರೋ.ಡಾ.ಝಹೀರ್ ಕೋಲಾ, ರೋಟರಾಕ್ಟ್ ಮತ್ತು ಇಂಟರಾಕ್ಟ್ ಕ್ಲಬ್‌ಗಳ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಭಟ್ಕಳ ಎಜುಕೇಶನ್ ಟ್ರಸ್ಟ್ನ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ್, ಮಹಾವಿದ್ಯಾಲಯದ ಪ್ರಾಂಶುಪಾಲ ಶ್ರೀನಾಥ್ ಪೈ, ರೋಟರಾಕ್ಟ್ ಸಂಯೋಜಕ ದೇವೆಂದ್ರ ಕಿಣಿ, ರೋಟರಾಕ್ಟ್ ನೂತನ ಅಧ್ಯಕ್ಷೆ ರಮ್ಯಾ ರಾವ್, ಕಾರ್ಯದರ್ಶಿ ಛಾಯಾ ಪುರಾಣಿಕ್, ಖಜಾಂಚಿ ದಿವ್ಯಾ ಮೊಗೇರ್, ರೋಟರಿ, ರೋಟರಾಕ್ಟ್ ಮತ್ತು ಇಂಟರಾಕ್ಟ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು. 




ರೋಟರಾಕ್ಟ್ ನಿಕಟಪೂರ್ವ ಅಧ್ಯಕ್ಷೆ ವೈಷ್ಣವಿ ನಾಯ್ಕ್ ಸ್ವಾಗತಿಸಿದರು, ಕಾರ್ಯದರ್ಶಿ ಪ್ರಜ್ಞಾ ಗೋಳಿ 2023-24ನೇ ಸಾಲಿನಲ್ಲಿ ಜರುಗಿದ ರೋಟರಾಕ್ಟ್ ಚಟುವಟಿಕೆಗಳ ಕುರಿತಾಗಿ ವರದಿ ವಾಚಿಸಿದರು, ಸದಸ್ಯರಾದ ಪವಿತ್ರ ನಾಯ್ಕ್ ಮತ್ತು ವಿನುತಾ ನಾಯ್ಕ್ ನಿರೂಪಿಸಿ ವ೦ದಿಸಿದರು.

Tuesday, October 22, 2024

KUD ಕುಲಪತಿಯಾಗಿ ಆಯ್ಕೆಯಾದ ಡಾ.ಬಿ.ಎಂ.ಪಾಟೀಲ್ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು

ಹೃತ್ಪೂರ್ವಕ ಅಭಿನಂದನೆಗಳು

ಜಗತ್ತಿನ ಅತ್ಯಂತ ಪುರಾತನ ಕ್ರೀಡೆ ಕುಸ್ತಿಯು ಒಂದು ಸಮರ ಕಲೆ ಮತ್ತು ಯುದ್ಧ ಕ್ರೀಡೆಯಾಗಿದ್ದು, ಇಂತಹ ಸಮರ ಕಲೆಯಲ್ಲಿ ಸೈ ಎನಿಸಿಕೊಂಡು, ಕುಸ್ತಿಪಟುವಾಗಿ ಸಾಧನೆಯ ಶಿಖರವೇರಿರುವ ಡಾ.ಬಿ.ಎಂ.ಪಾಟೀಲ್ ರವರು, ಸುಮಾರು 25 ಸಂವತ್ಸರಗಳನ್ನು ಪೂರೈಸಿರುವ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅತ್ಯುನ್ನತ ಹುದ್ದೆಯಾದ ಉಪಕುಲಪತಿ ಪದವಿಯನ್ನು ಅಲಂಕರಿಸುವ ಮೂಲಕ ಕರುನಾಡಿನ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಹೊಸ ಅಧ್ಯಾಯಕ್ಕೆ ನಾಂದಿಹಾಡಿದ್ದು ಹೆಮ್ಮೆಯ ಸಂಗತಿಯಾಗಿದೆ. 

ದೈಹಿಕ ಶಿಕ್ಷಣ ನಿರ್ದೇಶಕರು, ಶಿಕ್ಷಕರ ತರಬೇತಿ ವಿಭಾಗದ ಡೀನ್ ಆಗಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದು, ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಅತ್ಯುನ್ನತ ಹುದ್ದೆಯು ತಮ್ಮನ್ನು ಅರಸಿಕೊಂಡು ಬಂದಿರುವುದು ಶಿಕ್ಷಣ ಕ್ಷೇತ್ರದ ಭಾಗ್ಯದ ಬಾಗಿಲು ತೆರೆದಂತಾಗಿದೆ.   

ಈ ಸಾಧನೆಯು ನಿಮ್ಮ ಶ್ರಮ, ನಿಷ್ಠೆ ಮತ್ತು ಶ್ರೇಷ್ಠತೆಯ ಪ್ರತೀಕವಾಗಿದೆ. ನೀವು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಅಧ್ಯಾಪಕರಿಗೆ ಇಷ್ಟು ವರ್ಷಗಳಿಂದ ಸಲ್ಲಿಸಿದ ಸೇವೆ, ನೀಡಿದ ಮಾರ್ಗದರ್ಶನ ಮತ್ತು ಸಹಕಾರ ಸದಾ ಶ್ಲಾಘನೀಯ. ಶೈಕ್ಷಣಿಕ ಕ್ಷೇತ್ರದಲ್ಲಿ, ವಿಶೇಷವಾಗಿ ಕ್ರೀಡೆ ಮತ್ತು ಕ್ರೀಡಾ ಸಂಶೋಧನೆಯಲ್ಲಿ ನೀವು ತೋರಿಸಿದ ವಿಶಿಷ್ಠ ಪ್ರತಿಭೆ, ಈ ಅತ್ಯುನ್ನತ ಪಾತ್ರದಲ್ಲಿ ಇನ್ನಷ್ಟು ಸಮೃದ್ಧಿಯನ್ನು ಹೊಂದುವುದು ಸೂರ್ಯ-ಚಂದ್ರರಷ್ಟೆ ನಿಶ್ಚಿತ.

ನೀವು ಉತ್ತಮ ಮತ್ತು ಸಮಗ್ರ ವಿದ್ಯಾ ವಿಕಾಸಕ್ಕಾಗಿ ಕೈಗೊಂಡ ನಿರ್ಧಾರಗಳು, ವಿದ್ಯಾರ್ಥಿ ಕಲಿಕೆಗೆ ಹಾಗೂ ಸರ್ವಾಂಗೀಣ ಪ್ರಗತಿಗೆ ಉತ್ತೇಜನ ನೀಡುವುದು ಹಾಗೂ ವಿದ್ಯಾರ್ಥಿ ಸಮುದಾಯ ಸೇವೆಯಲ್ಲಿ ನಿಮ್ಮ ನಿಷ್ಠೆ ಸಮಾಜದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿದೆ. ನಿಮ್ಮ ನಾಯಕತ್ವದಲ್ಲಿ, ವಿಶ್ವವಿದ್ಯಾಲಯವು ಉತ್ತಮ ಶಿಕ್ಷಣ ಮತ್ತು ಸಂಶೋಧನೆಯ  ಕೇಂದ್ರವಾಗಿ, ಉಚ್ಛಾçಯ ಸ್ಥಾನವನ್ನು ಅಲಂಕರಿಸಲೆನ್ನುವುದು ನಮ್ಮೆಲ್ಲರ ಅಭೀಲಾಷೆಯಾಗಿದೆ.  .




ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದ ಉಪಕುಲಪತಿ ಹುದ್ದೆಯನ್ನು ಅಲಂಕರಿಸಿದ ನೀವು, ನಿಮ್ಮ ಯೋಜಿತ ಕಾರ್ಯಗಳು ಮತ್ತು ಸಂಕಲ್ಪಗಳು ನಿಮ್ಮ ಅಧಿಕಾರಾವಧಿಯಲ್ಲಿ ಸುಸಂಪನ್ನಗೊಳ್ಳಲಿ ತನ್ಮೂಲಕ ವಿದ್ಯಾರ್ಥಿ ಹಾಗೂ ಶಿಕ್ಷಕ ಸಮೂಹವನ್ನು ಹೊಸ ಸಾಧನೆಯೇಡೆಗೆ ಪ್ರೇರೇಪಿಸಲಿ ಎಂದು ಆಶಿಸುತ್ತ, ತಮಗೆ ತುಂಬು ಹೃದಯದ ಅಭಿನಂದನೆಗಳು.

ಭಟ್ಕಳ ಎಜುಕೇಶನ್ ಟ್ರಸ್ಟ್(ರಿ), ಭಟ್ಕಳ 
ವಿದ್ಯಾರ್ಥಿಗಳು, ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ದೈಹಿಕ ಶಿಕ್ಷಕರು, ಶ್ರೀ ಗುರು ಸುಧೀಂದ್ರ ಕಾಲೇಜು, ಭಟ್ಕಳ 

ಹೃತ್ಪೂರ್ವಕ ಅಭಿನಂದನೆಗಳು

Tuesday, October 8, 2024

ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ 'ನಾಯಕತ್ವ ವಿಕಸನ ಕಾರ್ಯಾಗಾರ'

ಭಟ್ಕಳ: ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮುಂಬಯಿನ ಖ್ಯಾತ ಫ್ರೀಡಂ ಅಫ್ ಫ್ರೀ ಎಂಟರಪ್ರೆöÊಸೆಸ್ ನ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಎರಡು ದಿನಗಳ ಕಾಲ ನಾಯಕತ್ವ ವಿಕಸನ ಕಾರ್ಯಾಗಾರವು ಜರುಗಿತು.

ಮುಖ್ಯ ತರಬೇತುದಾರರಾದ ವಿವೇಕ ಪಟ್ಕಿ ಮಾತನಾಡಿ "ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಪ್ರತಿಯೊಂದು ಚಟುವಟಿಕೆಗಳನ್ನು ಅವಕಾಶವಾಗಿ ಸ್ವೀಕರಿಸಬೇಕು, ಆಗಲೇ ಯಶಸ್ಸು ಗಳಿಸಲು ಸಾಧ್ಯ" ಎಂದು ಕಿವಿಮಾತು ಹೇಳಿದರು. ಮತ್ತೋರ್ವ ತರಬೇತಿದಾರರಾದ ರಾಜೀವ ಕುಮಾರ ಮಾತನಾಡಿ "ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಅಷ್ಟೇ ಶೃದ್ಧೆಯಿಂದ ಪಾಲ್ಗೊಳ್ಳಬೇಕು, ಅದು ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ" ಎಂದು ಸೂಚಿಸಿದರು.  


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷ ಡಾ. ಸುರೇಶ ನಾಯಕ್ "ವಿದ್ಯಾರ್ಥಿಗಳು ಪದವಿಯ ಮೂರು ವರ್ಷಗಳನ್ನು ಸೂಕ್ತವಾಗಿ ಉಪಯೋಗಿಸಿ, ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಟ್ರಸ್ಟೀ ಮ್ಯಾನೇಜರ್ ರಾಜೇಶ್ ನಾಯಕ ಮಾತನಾಡಿ "ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನದಲ್ಲಿ ಸಂವಹನ ಕೌಶಲ್ಯ ಪ್ರಮುಖವಾದುದು, ಕಾರಣ ಸಂವಹನ ಕೌಶಲ್ಯನ್ನು ವೃದ್ಧಿಸಿಕೊಳ್ಳಲು ಹೆಚ್ಚು ಗಮನಹರಿಸಬೇಕು" ಎಂದು ಹೇಳಿದರು. 




ಪ್ರಾಂಶುಪಾಲರಾದ ಶ್ರೀನಾಥ ಪೈ ಪ್ರಾಸ್ತಾವಿಕವಾಗಿ ಮಾತನಾಡಿ ತರಬೇತಿ ಕಾರ್ಯಾಗಾರದ ಮಹತ್ವವನ್ನು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಹಂಚಿಕೊAಡರು. ಭಾಗವಹಿಸಿದ ವಿದ್ಯಾರ್ಥಿಗಳಿಗೆ ಎಂ.ಆರ್.ಪೈ ಫೌಂಡೇಶನ್ ವತಿಯಿಂದ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ವಿವಿಧ ವಿಭಾಗದ ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. 

Wednesday, October 2, 2024

SGSC NSS 'ಸ್ವಚ್ಛ ತಾ ಹೀ ಸೇವಾ' ಕಾರ್ಯಕ್ರಮ ಸಂಪನ್ನ


ಭಟ್ಕಳ: ಮಹಾತ್ಮ ಗಾಂಧೀಜಿ ಜಯಂತಿಯ ಪ್ರಯುಕ್ತ ರಾಷ್ಟ್ರೀಯ ಸೇವಾ ಯೋಜನೆಯು ದೇಶಾದ್ಯಂತ ಕಾಲೇಜುಗಳಲ್ಲಿ ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 2ರ ವರೆಗೆ 'ಸ್ವಚ್ಛ ತಾ ಹೀ ಸೇವಾ' ಎಂಬ ಕಾರ್ಯಕ್ರಮದ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿತ್ತು ಅದರಂತೆ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ಎನ್.ಎಸ್.ಎಸ್ ಘಟಕವು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ, 2 ಅಕ್ಟೋಬರ್ ದಂದು ಭಟ್ಕಳದ ಮುಂಡಳ್ಳಿ ಗ್ರಾಮದ ನೆಸ್ತಾರ ಕಡಲ ತೀರದಲ್ಲಿ ಪ್ಲಾಸ್ಟಿಕ್ ಮುಕ್ತ ಬೀಚ್ ಅಭಿಯಾನವನ್ನು ಹಮ್ಮಿ ಕೊಂಡಿತು.









ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುವುದರೊಂದಿಗೆ ಉನ್ನತ ಭಾರತ ಅಭಿಯಾನ, ಯುತ್ ರೆಡ್ ಕ್ರಾಸ್ ಘಟಕ, ರೊಟರಾಕ್ಟ ಘಟಕದ ಸ್ವಯಂಸೇವಕರ ಸಹಕಾರದೊಂದಿಗೆ ಸಮುದ್ರ ತೀರವನ್ನು ಸ್ವಚ್ಛ ಗೊಳಿಸಲಾಯಿತು.

"ಗಾಂಧಿ ಇನ್ ಮಿ" ಎಂಬ ಡಿಜಿಟಲ್ ಪ್ರತಿಜ್ಞೆಯನ್ನು ಪಡೆಯುವ ಮಾಹಿತಿಯನ್ನು ಸರ್ವರಿಗೂ ನೀಡಲಾಯಿತು. ಸ್ವಯಂಸೇವಕರು, ಕಾರ್ಯಕ್ರಮ ಅಧಿಕಾರಿಗಳು, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Tuesday, October 1, 2024

ಶ್ರೀ ಗುರು ಸುಧೀಂದ್ರ ಕಾಲೇಜಿನ ಅಂತಿಮ ವರ್ಷದ ಪರೀಕ್ಷೆಯಲ್ಲಿ ಶೇ.94 ಫಲಿತಾಂಶ


ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರು ನಡೆಸಿದ ಪದವಿ ಕೋರ್ಸನ ಅಂತಿಮ ಸೆಮೆಸ್ಟರ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜು ಶೇ. 94 ಫಲಿತಾಂಶ ಪಡೆದಿರುತ್ತದೆ.

ಬಿ.ಕಾಂ ವಿಭಾಗದಲ್ಲಿ ಸಂಗೀತಾ ಮಾದೇವ್ ನಾಯ್ಕ 9.83, ಬಿಸಿಎ ವಿಭಾಗದಲ್ಲಿ ಮಧುರ ಎಂ ನಾಯ್ಕ 9.85, ಬಿಬಿಎ ದಿವ್ಯಾ ಸುದೇಶ್ ನಾಯ್ಕ 9.23 ಎಸ್.ಜಿ.ಪಿ.ಎ ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. 

ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ'ನ ಅಧ್ಯಕ್ಷರಾದ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ ಬಿ ನಾಯಕ, ಟ್ರಸ್ಟಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.